ಬೆಂಗಳೂರು: ಪ್ರವಾಸಿಗರು ಕೇಳಿದ ಕೇವಲ 4 ಗಂಟೆಯೊಳಗೆ ಮಧುರೈ-ಕನ್ಯಾಕುಮಾರಿ ಮತ್ತು ರಾಮೇಶ್ವರಂ ಪ್ರವಾಸವನ್ನು ಯಶಸ್ವಿಯಾಗಿ ಆಯೋಜಿಸಿದ ಅಡಿಗಾಸ್ ಯಾತ್ರಾಗೆ ಪ್ರವಾಸಿಗರು ಸಂಭ್ರಮದಿಂದ ಕೃತಜ್ಞತೆ ಸಲ್ಲಿಸಿದ್ದಾರೆ. ಮನದುಂಬಿ ಹಾರೈಸಿದ್ದಾರೆ.
ನಡೆದ ಈ ಅಚ್ಚರಿಯ ಘಟನೆ ಹೀಗಿದೆ. ಇಬ್ಬರು ಹಿರಿಯ ಪ್ರವಾಸಿಗರು 2026 ರ ಫೆಬ್ರವರಿ 23ರಂದು ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿದ್ದರು. ಮಧುರೈ- ಕನ್ಯಾಕುಮಾರಿ-ರಾಮೇಶ್ವರಂಗೆ ಫೆಬ್ರವರಿ 24ರಂದು ಕಸ್ಟಮೈಸ್ಡ್ ಟೂರ್ ಆಯೋಜಿಸಲು ಸಾಧ್ಯವೇ ಎಂದು ವಿಚಾರಿಸಿದ್ದರು.
ಗ್ರಾಹಕರ ಕರೆಗೆ ಕೂಡಲೇ ಓಗೊಟ್ಟ ಅಡಿಗಾಸ್ ಯಾತ್ರಾ ಸಿಬ್ಬಂದಿ, 3 ರಾತ್ರಿ ಮತ್ತು 4 ಹಗಲುಗಳ ಈ ಕಸ್ಟಮೈಸ್ಡ್ ಟೂರ್ ಪ್ಯಾಕೇಜ್ ಅನ್ನು ಅಚ್ಚುಕಟ್ಟಾಗಿ ಆಯೋಜಿಸಿದರು. ಕೇವಲ 4 ಗಂಟೆಯಲ್ಲಿಯೇ ಎಲ್ಲ ಅಗತ್ಯ ವಿವರಗಳನ್ನು ಸಂಗ್ರಹಿಸಲಾಯಿತು. ಬುಕಿಂಗ್ ಅನ್ನು ದೃಢಪಡಿಸಲಾಯಿತು. ಪ್ಲಾನ್ ಪ್ರಕಾರ, ಅದೇ ದಿನ ರಾತ್ರಿ ಅತಿಥಿಗಳು ತಮ್ಮ ಪ್ರವಾಸವನ್ನು ಆರಂಭಿಸಿದರು. ವ್ಯವಸ್ಥಿತ ಮತ್ತು ಕ್ಷಿಪ್ರ ಸ್ಪಂದನೆಗೆ ಪ್ರವಾಸಿಗರು ಅಪಾರ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಅಡಿಗಾಸ್ ಯಾತ್ರಾ ಪ್ರತಿಯೊಬ್ಬ ಪ್ರವಾಸಿಗರ ಅವಶ್ಯಕತೆಗಳನ್ನು, ಅಗತ್ಯಗಳನ್ನು, ಬೇಡಿಕೆಗಳನ್ನು ತಕ್ಷಣವೇ ಸಮಗ್ರವಾಗಿ, ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಪೂರೈಸಿ ಮನಗೆಲ್ಲುತ್ತದೆ. ಗ್ರಾಹಕರ ನೆಮ್ಮದಿಯ, ಸಂತೃಪ್ತಿಯ ಪ್ರತಿಸ್ಪಂದನೆಯೇ ಇದಕ್ಕೆ ಸಾಕ್ಷಿಯಾಗಿದೆ.
ಪ್ರವಾಸೋದ್ಯಮದಲ್ಲಿ 32 ವರ್ಷಗಳ ಸುದೀರ್ಘ ಅನುಭವದ ಹಿನ್ನೆಲೆ, ವ್ಯಾಪಕವಾದ ನೆಟ್ ವರ್ಕ್, ನುರಿತ ಸಿಬ್ಬಂದಿಯ ಸೇವೆಯಿಂದ ಇದು ಸಾಧ್ಯವಾಗಿದೆ. ನಿಮಗೂ ಇಂಥ ಕಸ್ಟಮೈಸ್ಡ್ ಪ್ರವಾಸ ಮಾಡುವ ಉದ್ದೇಶ ಇದ್ದರೆ, ತಡವೇಕೆ? ಈ ಕೂಡಲೇ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿ, ನಿಮ್ಮ ಇಷ್ಟದ ತಾಣಗಳಿಗೆ ಟೂರ್ ಪ್ಯಾಕೇಜ್ ಗಳಿಸಿ ಆನಂದಿಸಿ.
